ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Biography of Nalvadi Krishnaraja Wodeyar in Kannada

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ Biography of Nalvadi Krishnaraja Wodeyar information jeevana charitre in kannada

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ

Biography of Nalvadi Krishnaraja Wodeyar in Kannada
ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ

ಈ ಲೇಖನಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಆರಂಭಿಕ ಜೀವನ

ಕೃಷ್ಣರಾಜ ಒಡೆಯರ್ 1884 ರ ಜೂನ್ 4 ರಂದು ಮೈಸೂರು ಅರಮನೆಯಲ್ಲಿ ಜನಿಸಿದರು. ತಂದೆ ಚಾಮರಾಜ ಒಡೆಯರ್, ತಾಯಿ ಕೆಂಪ ನಂಜಮ್ಮಣ್ಣಿ. ಇವರು ತಮ್ಮ 10 ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬರುತ್ತಾರೆ. ತಾಯಿ ಕೆಂಪ ನಂಜಮ್ಮಣ್ಣಿ ರಾಜಪ್ರತಿನಿಧಿಯಾಗಿ ವಾಣಿ ವಿಲಾಸ ಸನ್ನಿದಾನದಲ್ಲಿ ಆಡಳಿತ ನಿರ್ವಹಿಸಿದಳು.

ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ

ಮಹಾರಾಜರು ತಮ್ಮ ಆರಂಭಿಕ ಶಿಕ್ಷಣ ಮತ್ತು ತರಬೇತಿಯನ್ನು ಲೋಕರಂಜನ್ ಅರಮನೆಯಲ್ಲಿ ಪಿ.ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪಡೆದರು. ಪಾಶ್ಚಾತ್ಯ ಅಧ್ಯಯನದ ಜೊತೆಗೆ, ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕಲಿಸಿದರು ಮತ್ತು ಕುದುರೆ ಸವಾರಿ ಮತ್ತು ಭಾರತೀಯ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಕಲಿಸಿದರು. ಅವರ ಆರಂಭಿಕ ಆಡಳಿತಾತ್ಮಕ ತರಬೇತಿಯನ್ನು ಬಾಂಬೆನಾಗರಿಕ ಸೇವೆಯ ಸರ್ ಸ್ಟುವರ್ಟ್ ಫ್ರೇಸರ್ ಅವರು ನೀಡಿದರು. ನ್ಯಾಯಶಾಸ್ತ್ರದ ತತ್ವಗಳು ಮತ್ತು ಆದಾಯ ಆಡಳಿತದ ವಿಧಾನಗಳ ಅಧ್ಯಯನವು ರಾಜ್ಯದ ವ್ಯಾಪಕ ಪ್ರವಾಸಗಳಿಂದ ಪೂರಕವಾಗಿದೆ, ಈ ಸಮಯದಲ್ಲಿ ಅವರು ನಂತರ ಆಳಲು ಬಂದ ದೇಶದ ಸ್ವರೂಪದ ಬಗ್ಗೆ ವ್ಯಾಪಕವಾದ ಜ್ಞಾನವನ್ನು ಪಡೆದರು.

ಆಳ್ವಿಕೆ ಮತ್ತು ಸಾಧನೆ

ಆಸ್ಥಾನದಲ್ಲಿ ಸಂಗೀತಕ್ಕೆ ಪ್ರೋತ್ಸಾಹ :

ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಂಗೀತಕ್ಕೆ ವಿಶೇಷ ಘೋಷಣೆ ನೀಡಿದರು. ವೀಣೆ ಶೇಷಣ್ಣ, ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ, ಮುತ್ತಯ್ಯ, ಎಸ್.ಕೇಶವಮೂರ್ತಿ, ಪಿಟೀಲು ರಾಮನಂತವರು ಆಸ್ಥಾದಲ್ಲಿದ್ದರು.

ದಿವಾನರುಗಳು :

ಕೃಷ್ಣಮೂರ್ತಿ, ಮಾದವರಾವ್‌, ಆನಂದರಾವ್‌, ಸರ್.ಎಂ. ವಿಶ್ವೇಶ್ವರಯ್ಯ, ಕಾಂತರಾಜೇ ಅರಸ್‌ ಮತ್ತು ಮಿರ್ಜಾ ಇಸ್ಮಾಯಿಲ್‌ ರಂತಹ ದಕ್ಷ ದಿವಾನರು ಇವರ ಕಾಲದ ಪ್ರಗತಿಗೆ ಕಾರಣರಾದರು.

ಆಡಳಿತ ಸುಧಾರಣೆ

ಪ್ರಜಾಪ್ರತಿನಿಧಿ ಸಭೆ :

1923 ರಲ್ಲಿ ಹೊಸ ಕಾನೂನನ್ನು ಜಾರಿಗೆ ತರಲಾಯಿತು ಮತ್ತು ಇದರಿಂದ ಈ ಸಭೆ ಶಾಸನಬದ್ದ ಸಭೆಯಾಯಿತು. ವರ್ಷಕ್ಕೆ 2 ಬಾರಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ 275 ಜನ ಸದಸ್ಯರಿದ್ದರು.

ನ್ಯಾಯವಿಧಾಯಕ ಸಭೆ :

1907 ರಲ್ಲಿ ಸ್ಥಾಪನೆ ಒಟ್ಟು 50 ಜನ ಸದಸ್ಯರಿದ್ದರು. ಅದರಲ್ಲಿ ಜನರಿಂದ ಆಯ್ಕೆಯಾದವರು 22 ಜನರಿದ್ದರು.

ಈ ಸಂಸ್ಥೆ ಮೇಲ್ಮನೆಯ ರೀತಿಯಲ್ಲಿ ಕಾರ್ಯ ಮಾಡುತ್ತಿತ್ತು, ಜೂನ್‌ ಮತ್ತು ಡಿಸೆಂಬರ್‌ ತಿಂಗಳು ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆಗಳು

  • ಹಲವಾರು ಊರುಗಳಿಗೆ ರೈಲು ಮಾರ್ಗಗಳನ್ನು 1931 ರ ವೇಳೆಗೆ ಪೂರೈಸಲಾಯಿತು.
  • 1907 ರಲ್ಲಿ ವಾಣಿ ವಿಲಾಸ ಸಾಗರ ಆಣೆಕಟ್ಟು.
  • 1911 ರಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟು.
  • ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವ್ನು ಉಚಿತ ಮತ್ತು ಕಡ್ಡಾಯ.
  • 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನ್ನು ಪ್ರಾರಂಭಿಸಲಾಯಿತು.
  • ಮೈಸೂರು ವಿಶ್ವವಿದ್ಯಲಯ ಸ್ಥಾಪನೆ – 1916.
  • ಅಕ್ಟೋಬರ್‌ 2, 1913 ರಂದು ಮೈಸೂರು ಬ್ಯಾಂಕ್‌ ಸ್ಥಾಪನೆ.
  • 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು.
  • 1918 ರ ಮಿಲ್ಲರ್‌ ಸಮಿತಿ
  • 1921 ರಲ್ಲಿ ಪ್ರಥಮ ಬಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಶೇ 75% ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಲಾಯಿತು.
  • 1939ರ ಫೆಬ್ರವರಿ 5 ರಂದು ಜೋಗ ಜಲಪಾತದ ಬಳಿ ಶರಾವತಿ ನೀರಿನಿಂದ ವಿದ್ಯುತ್‌ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಯಿತು.

ಸಾಮಾಜಿಕ ಕಾನೂನುಗಳು

  • 1909 ದೇವದಾಸಿ ಪದ್ದತಿ ನಿಷೇಧ.
  • 1910 ಬಸವಿ ಪದ್ದತಿ ರದ್ದತಿ, ಗೆಜ್ಜೆಪೂಜೆ ಪದ್ದತಿ ನಿಷೇಧ.
  • 1936 ರವೇಶಾವೃತ್ತಿ ತಡೆಗಟ್ಟುವ ಕಾಯ್ದೆ.
  • ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಕಾಯ್ದೆ.
  • 1914 ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ.
  • 1919 ಮಾದ್ಯಮಿಕ ಶಾಲಾ ಶಿಕ್ಷಣ ಶುಲ್ಕ ರದ್ದತಿ.
  • 1927 ರಲ್ಲಿ ಮೊಟ್ಟಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು.
  • 1905 ರಲ್ಲಿ ಸಹಕಾರಿ ಕಾರ್ಮಿಕರ ಪರಿಹಾರ ಕಾಯ್ದೆ.
  • 1913 ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ.
  • 1918 ಗ್ರಾಮ ಪಂಚಾಯಿತಿಗಳ ಕಾಯ್ದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಘನತೆ ಮತ್ತು ಗೌರವ

  • ಗಾಂಧೀಜಿಯವರು ಸಹ ಹರಿಜನ ಪತ್ರಿಕೆಯಲ್ಲಿ ಮೈಸೂರನ್ನು ರಾಮರಾಜ್ಯ ಎಂದು ಮಾಹಾರಾಜರನ್ನು “ರಾಜರ್ಷಿ” ಎಂದು ಕರೆಯುತ್ತಾರೆ.
  • ಬ್ರಿಟೀಷ್‌ ಸರ್ಕಾರ ಅವರಿಗೆ “ಗ್ರ್ಯಾಂಡ್‌ ಕಮಾಂಡರ್‌ ಆಫ್‌ ಇಂಡಿಯನ್‌ ಎಂಪೈರ” ಎಂಬ ಬಿರುದನ್ನು ಕೊಟ್ಟಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮರಣ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 38 ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ಪ್ರಜೆಗಳಿಂದ “ರಾಜರ್ಷಿ” ಬಿರುದು ಪಡೆದರು. ತಮ್ಮ ಸಂಸ್ಥಾನದ ಏಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ 3,1940 ರಲ್ಲಿ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು.

FAQ

ವಿಶ್ವದ ಅತ್ಯಂತ ಹಳೆಯ ವಿಶೇಷ ನೇತ್ರಶಾಸ್ತ್ರದ ಆಸ್ಪತ್ರೆ ಯಾವುದು?

ಮಿಂಟೋ ಕಣ್ಣಿನ ಆಸ್ಪತ್ರ 1903 ರಲ್ಲಿ ಸ್ಥಾಪಿಸಲಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕ ಕಾಲದಲ್ಲಿ ಬೀದಿ ದೀಪಗಳನ್ನು ಹೊಂದಿರುವ ಏಷ್ಯಾದ ಮೊದಲ ನಗರ ಯಾವುದು?

ಬೆಂಗಳೂರು.

ಇತರೆ ವಿಷಯಗಳು :

ಬುದ್ಧನ ಜೀವನ ಚರಿತ್ರೆ

ರಾಜೇಂದ್ರ ಪ್ರಸಾದ್ ಅವರ ಜೀವನ ಚರಿತ್ರೆ

Leave a Reply

Your email address will not be published. Required fields are marked *