ಪಂಚಾಯತ್‌ ರಾಜ್‌ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಮಾಹಿತಿ | Information About Panchayat Raj Development Commissions in Kannada

ಪಂಚಾಯತ್‌ ರಾಜ್‌ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಮಾಹಿತಿ Information About Panchayat Raj Development Commissions Panchayt Vikaskke Sambandisida Ayogagala Bagge Mahiti in Kannada

ಪಂಚಾಯತ್‌ ರಾಜ್‌ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಮಾಹಿತಿ

Information About Panchayat Raj Development Commissions in Kannada
Information About Panchayat Raj Development Commissions in Kannada

ಈ ಲೇಖನಿಯಲ್ಲಿ ಪಂಚಾಯತ್‌ ರಾಜ್‌ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಬಲವಂತರಾಯ ಮೆಹ್ತಾ ಸಮಿತಿ :

  • ನೇಮಕ – ೧೯೫೭ ಜನವರಿ
  • ವರದಿ ಸಲ್ಲಿಕೆ – ೨೪ ೨೪/೧೧/೧೯೫೭
  • ಶಿಫಾರಸ್ಸುಗಳು – ಈ ಸಮಿತಿಯ ವರದಿಯನ್ನು ೧೯೫೮ ರಲ್ಲಿ NDC ಅಂಗೀಕರಿಸಿತು.
  • ಈ ಸಮಿತಿ ಪಂಚಾಯತ್‌ ರಾಜ್‌ ಹೆಸರಿನ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣದ ವ್ಯವಸ್ಥೆಯನ್ನು ಜಾರಿಗೊಳಿಸಿತು.
  • ಈ ಸಮಿತಿ ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿ, ಜಿಲ್ಲಾ ಪರಿಷತ್ತು ಎಂಬ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಜಾರಿಗೊಳಿಸಲು ಶಿಫಾರಸ್ಸು ಮಾಡಿತು.
  • ಜಿಲ್ಲಾಧಿಕಾರಿಯು ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿಬೇಕು.
  • ಪಂಚಾಯತ್‌ ಸಮಿತಿ ಮುಖ್ಯ ಕಾರ್ಯನಿರ್ವಹಣ ಸಂಸ್ಥೆಯಾಗಿರಬೇಕು. ಹಾಗೂ ಜಿಲ್ಲಾ ಪರಿಷತ್ತು ಸಲಹೆ ನೀಡುವ ಮತ್ತು ಮೇಲ್ವಿಚಾರಣ ಸಂಸ್ಥೆಯಾಗಿಬೇಕು.
  • ಇದರ ಪರಿಣಾಮ ಈ ಸಮಿತಿಯು ಶಿಫಾರಸ್ಸುಗಳನ್ವಯ ದೇಶದಲ್ಲಿ ಪ್ರಪ್ರಥಮ ಪಂಚಾಯತ್‌ ರಾಜ್‌ ಸಂಸ್ಥೆಯನ್ನು ರಾಜಸ್ತಾನ ರಾಜ್ಯದ ನಾಗೂರು ಜಿಲ್ಲೆಯಲ್ಲಿ ೦೨/ ೧೦/ ೧೯೫೯ ರಂದು ನೆಹರು ಉದ್ಗಾಟಿಸಿದರು. ೨ ನೇ ರಾಜ್ಯ ಆಂದ್ರಪ್ರದೇಶಗಳಲ್ಲಿ ಜಾರಿಗೊಳಿಸಿದರು.

ಕೆ ಸಂತಾನಂ ( ಹಣಕಾಸು ವಿಕೇಂದ್ರಿಕರಣ ) :

  • ನೇಮಕ – ೧೯೬೩
  • ಇದನ್ನು ಪಂಚಾಯಿತಿಗಳಿಗೆ ಹಣಕಾಸನ್ನು ಹಂಚಿಕೆ ಮಾಡಲು ನೇಮಕ ಮಾಡಲಾಯಿತು.
  • ಪಂಚಾಯಿತಿಗಳು ಮನೆ, ತೆರಿಗೆ ಬೂಕಂದಾಯ ವಸೂಲಿ ಮಾಡಬಹುದು.
  • ರಾಜ್ಯಮಟ್ಟದ ಅನುಧಾನವನ್ನು ಪಂಚಾಯಿತಿಗಳಿಗೆ ವರ್ಗಾಯಿಸುವುದು.
  • ಪಂಚಾಯತ್‌ ರಾಜ್‌ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಬೇಕು.

ಅಶೋಕ ಮೆಹ್ತಾ ಸಮಿತಿ :

  • ನೇಮಕ – ೧೯೭೭
  • ೨ ಹಂತದ ಪಂಚಾಯತ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದು.

೧. ಜಿಲ್ಲಾ ಪರಿಷತ್ತು. ೨. ಮಂಡಲ ಪಂಚಾಯತಿ.

  • ಒಬ್ಬ ಪಂಚಾಯಿತ್‌ ರಾಜ್‌ ಸಚಿವರನ್ನು ನೇಮಿಸುವುದು.
  • ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಭಾಗವಹಿಸಬಹುದು.
  • SC / ST ಮತ್ತು ಮಹಿಳೆಯರಿಗೆ ಮೀಸಲಾತಿ ನೀಡುವುದು.
  • ಅವಧಿ ಮುಗಿದ ೬ ತಿಂಗಳೊಳಗೆ ಚುನಾವಣೆ ನಡೆಯಬೇಕು.
  • ಇದರ ಪರಿಣಾಮವಾಗಿ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಹೊಸ ಪಂಚಾಯತ್‌ ಕಾಯ್ದೆಯನ್ನು ಜಾರಿಗೆ ತಂದವು.

ದಂತವಾಲ ಸಮಿತಿ :

  • ನೇಮಕ – ೧೯೭೮
  • ಬ್ಲಾಕ್‌ ಮಟ್ಟದ ಯೋಜನೆಗೆ ಶಿಫಾರಸ್ಸು ಮಾಡಲಾಗಿದೆ.

ಹನುಮಂತರಾವ್‌ ಸಮಿತಿ :

  • ನೇಮಕ – ೧೯೮೪
  • ಜಿಲ್ಲಾ ಮಟ್ಟದ ಯೋಜನೆಗೆ ಶಿಫಾರಸ್ಸು ಮಾಡಿದರು.

GVK ರಾವ್‌ ಸಮಿತಿ :

  • ನೇಮಕ – ೧೯೮೫
  • ಈ ಸಮಿತಿಯನ್ನು ಆಡಳಿತ ಸಂಯೋಜನೆ ಮತ್ತು ಬಡತನ ನಿರ್ಮೂಲನಾ ಸಮಿತಿ ಎಂದು ಕರೆಯುವರು.
  • ಪಂಚಾಯಿತಿಗಳಲ್ಲಿ ಅಧಿಕಾರ ಶಾಹಿಗಳು ಪಾಲ್ಗೋಳ್ಳುವಂತಿಲ್ಲ.
  • ಜಿಲ್ಲಾ ಅಭಿವೃದ್ದಿ ಆಯುಕ್ತರ DDC ನೇಮಕ

L M ಸಿಂಗ್ವಿ ಸಮಿತಿ :

  • ನೇಮಕ – ೧೯೮೬
  • ಪ್ರಜಾಪ್ರಭುತ್ವ ಮತ್ತು ಅಭಿವೃದ್ದಿಗಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಪುನಶ್ಚೇತ ಸಮಿತಿ ಎನ್ನುವರು.
  • ಪಂಚಾಯತ್‌ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವುದು.
  • ದೇಶದಾದ್ಯಂತ ೩ ಹಂತಗಳ ಏಕರೂಪದ ಪಂಚಾಯತ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದು.
  • ಹಣಕಾಸು ವಿಕೇಂದ್ರಕರಿಸಲು ಹಣಕಾಸು ಆಯೋಗವನ್ನು ರಚಿಸಬೇಕು.
  • ಗ್ರಾಮಗಳಲ್ಲಿ ನ್ಯಾಯಪಂಚಾಯಿತಿಗಳನ್ನು ಸ್ಥಾಪಿಸುವುದು.
  • ಗ್ರಾಮಸಭೆಗಳನ್ನು ರಚಿಸಿ ಹೆಚ್ಚಿನ ಅಧಿಕಾರ ನೀಡುವುದು.
  • ಇದರ ಪರಿಣಾಮವಾಗಿ ೬೪ ನೇ, ೬೫ ನೇ, ೭೩ ನೇ ತಿದ್ದುಪಡಿಗಳನ್ನು ಮಾಡಲಾಗಿದೆ.

P. K ತುಂಗನ್‌ ಸಮಿತಿ : ( ೧೯೮೮ )

  • ಪಂಚಾಯತ್‌ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕು.

V. N ಗಾಡ್ಗಿಲ್‌ ಸಮಿತಿ ( ೧೯೮೯ )

  • ೩ ಹಂತದ ಪಂಚಾಯತಿಗಳ ರಚನೆಯಾಗುವುದು.
  • ಎಲ್ಲಾ ಪಂಚಾಯತಿಗಳ ಅವಧಿ ೫ ವರ್ಷ ಇರಬೇಕು.
  • SC/ ST ಮಹಿಳೆಯರಿಗೆ ಮೀಸಲಾತಿ ನೀಡುವುದು.

FAQ

V. N ಗಾಡ್ಗಿಲ್‌ ಸಮಿತಿಯು ಯಾವಾಗ ಜಾರಿಗೆ ಬಂದಿತು ?

೧೯೮೯

L. M ಸಿಂಗ್ವಿ ಸಮಿತಿಯು ಯಾವಾಗ ಜಾರಿಗೆ ಬಂದಿತು ?

೧೯೮೬

ಇತರೆ ವಿಷಯಗಳು :

ಭೂಮಿಯ ಚಲನೆಗಳ ಬಗ್ಗೆ ಮಾಹಿತಿ

ಮಾನವನ ವಿಕಾಸದ ಹಂತಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *