ಸಮಾಜ ಸುಧಾರಕರ ಬಗ್ಗೆ ಮಾಹಿತಿ | Information About Social Reformers in Kannada

ಸಮಾಜ ಸುಧಾರಕರ ಬಗ್ಗೆ ಮಾಹಿತಿ Information About Social Reformers Samaja Sudharakara Bagge Mahiti in Kannada

ಸಮಾಜ ಸುಧಾರಕರ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸಮಾಜ ಸುಧಾರಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಮಾಜ ಸುಧಾರಕರು

ಕ್ರಿ . ಶಕ ೮ ನೇ ಶತಮಾನದಿಂದ ೧೬ ನೇ ಶತಮಾನದವರೆಗಿನ ಕಾಲದಲ್ಲಿ ಅನೇಕ ಧಾರ್ಮಿಕ ಸುಧಾರಕರು ಜನ್ಮತಾಳಿದರು. ಅವರು ಚಿಂತನಶೀಲರಾಗಿದ್ದರು, ವೈಚಾರಿಕ ನೆಲೆಯಲ್ಲಿ ಧರ್ಮ ಮತ್ತು ಸಮಾಜದ ಪುನರುತ್ಥಾನ ಮಾಡಿದರು. ಈ ಪಾಠದಲ್ಲಿ ಸುಧಾರಣಾ ಚಳುವಳಿಯ ಮುಂಚೂಣಿಯಲ್ಲಿದ್ದ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಬಸವೇಶ್ವರರು ಮತ್ತು ಮಧ್ವಚಾರ್ಯರ ಜೀವನ ಹಾಗೂ ಸುಧಾರಣೆಗಳ

ಭಾರತದಲ್ಲಿ ಅನೇಕ ಮಹಾಪುರುಷರು ಜನ್ಮತಾಳಿದರು. ಇವರು ಬೋಧಕರು ಮಾತ್ರವೇ ಆಗಿರದೆ ಸಕ್ರಿಯವಾಗಿ ಸಮಾಜ ಸುಧಾರಣೆಯನ್ನೂ ಮಾಡಿದರು. ಇವರ ಸುಧಾರಣೆಗಳು ಜನರಲ್ಲಿದ್ದ ಅಜ್ಞಾನ ಮತ್ತು ಸಂಪ್ರದಾಯಗಳನ್ನು ತೊಡೆದು ಹಾಕಿದವು. ಇವರ ಪ್ರಭಾವ ಇಂದಿಗೂ ವ್ಯಾಪಾಕವಾಗಿ ಹರಡಿದೆ.

ಶಂಕರಾಚಾರ್ಯರು :

ಶಂಕರರು ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರತಿಭಾವಂತರಾದ ಅವರು ಎಂಟನೇ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಅರಿತರು. ಶಂಕರರ ತಂದೆ ಶಿವಗುರು ಮತ್ತು ತಾಯಿ ಆರ್ಯಾಂಬೆ. ಶಂಕರರು ಪ್ರತಿಪಾದಿಸಿದ ತತ್ವವನ್ನು ಅದ್ವೈತ ಎನ್ನುವರು.

ಶಂಕರಚಾರ್ಯರ ಕೊಡುಗೆಗಳು :

ಶಂಕರರು ಬದರಿ, ದ್ವಾರಕೆ, ಪುರಿ ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು. ಈ ಪೀಠಗಳು ಭಾರತೀಯ ಯರನ್ನು ಭಾವನಾತ್ಮಕವಾಗಿ ಹಾಗೂ ಧಾರ್ಮಿಕವಾಗಿ ಒಗೋಡಿಸುವ ಕೇಂದ್ರಗಳಾದವು. ಶಂಕರರು ಆನಂದ ಲಹರಿ, ಮುಂತಾದ ಗ್ರಂಥಗಳನ್ನು ಬರೆದರು. ಅವರ ಸ್ತೋತ್ರಗಳಲ್ಲಿ ಭಜಗೋವಿಂದಂ ಇಂದಿಗೂ ಜನಪ್ರಿಯವಾಗಿದೆ. ಶಂಕರರು ತಮ್ಮ ೩೨ ವರ್ಷಗಳ ಜೀವಿತ ಕಾಲದೊಳಗೆ ಇಷ್ಟೆಲ್ಲಾ ಸಾಧಿಸಿದ್ದರು.

ರಾಮಾನುಜಾಚಾರ್ಯರು :

ರಾಮಾನುಜಾಚಾರ್ಯರು ಚೆನೈ ಸಮೀಪದ ಶೀಪೆರಂಬುದೂರಿನಲ್ಲಿ ಜನಿಸಿದರು. ಕಾಂಚಿ ನಗರದಲ್ಲಿ ಶಾಸ್ತ್ರಾಧ್ಯಯನ ಮಾಡಿದರು. ಇವರ ತಂದೆ ಕೇಶವ ದೀಕ್ಷೀತರು, ತಾಯಿ ಕಾಂತಿಮತಿ. ಅವರು ಪ್ರತಿಪಾದಿಸಿದ ಸಿದ್ದಾಂತವನ್ನು ವಿಶಿಷ್ಟಾದ್ವೈತ ವೆಂದು ಕರೆಯುತ್ತಾರೆ. ಇವರು ದೇಶದ ನಾಲ್ಕೂ ದಿಕ್ಕಿನಲ್ಲಿ ಸಂಚರಿಸಿ ಶ್ರೀವೈಷ್ಣವಮತವನ್ನು ಪ್ರಚಾರ ಮಾಡಿದರು. ಮುಕ್ತಿಗೆ ಭಕ್ತಿ ಮತ್ತು ಶರಣಾಗತಿ ಮುಖ್ಯವೆಂದು ಸಾರಿದರು. ಚೋಳ ದೊರೆಯ ಕಿರುಕುಳ ತಾಳಲಾರದೆ ಕರ್ನಾಟಕಕ್ಕೆ ಬಂದ ಅವರಿಗೆ ಹೊಯ್ಸಳ ದೊರೆ ವಿಷ್ಣುವರ್ಧನನು ಮೇಲುಕೋಟೆಯಲ್ಲಿ ಆಶ್ರಯ ಕಲ್ಪಿಸಿದನು. ಇವರು ಸುಮಾರು ೧೨೦ ವರ್ಷಗಳ ಕಾಲ ಜೀವಿಸಿದ್ದರು.

ರಾಮಾನುಜಾಚಾರ್ಯರ ಸುಧಾರಣೆಗಳು :

ಜಾತಿವಾದವನ್ನು ಖಂಡಿಸಿದರು.

ಕೆಳವರ್ಗದ ಜನರೂ ಮೇಲುಕೋಟೆ ದೇವಾಲಯ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಿದರು.

ಬಸವೇಶ್ವರರು :

ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನದಲ್ಲಿ ಬಸವೇಶ್ವರರು ಅತ್ಯಂತ ಕ್ರಾಂತಿಕಾರಿ ಪಾತ್ರವಹಿಸಿದರು. ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯವರು. ಬಸವೇಶ್ವರರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಬಸವತತ್ವವನ್ನು ಶಕ್ತಿವಿಶಿಷ್ಟಾದ್ವೈತ ಎಂದು ಕರೆಯುತ್ತಾರೆ. ಬಾಲ್ಯದಲ್ಲಿ ಉಪನಯನ ಸಂಸ್ಕಾರಕ್ಕೆ ಒಪ್ಪದೆ ಲಿಂಗದೀಕ್ಷೆ ಪಡೆದರು. ಅವರ ವಿದ್ಯಾಭ್ಯಾಸ ಕೂಡಲಸಂಗಮದಲ್ಲಾಯಿತು.

ಕಲ್ಯಾಣದಿಂದ ಆಳ್ವಿಕೆ ನಡೆಸುತ್ತದ್ದ ಕಲಚೂರಿ ವಂಶದ ಬಿಜ್ಜಳನು ಬಸವೇಶ್ವರರನ್ನು ಭಂಡಾರದ ಅಧಿಕಾರಿಯಾಗಿ ನೇಮಿಸಿಕೊಂಡನು. ಕಲ್ಯಾಣದಲ್ಲಿ ಬಸವೇಶ್ವರರು ಕ್ರಾಂತಿಕಾರಿ ಚಿಂತನೆಗಳನ್ನು ಪ್ರಚಾರ ಮಾಡಲಾರಂಭಿಸಿದರು. ಸಂಪ್ರದಾಯಸ್ಥರು ಈ ಚಿಂತನೆಗಳನ್ನು ವಿರೋಧಿಸಿದರು. ಇದರಿಂದ ಮನನೊಂದ ಅವರು ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಹೋದರು. ಅವರು ನಂತರ ಕೂಡಲಸಂಗಮದಲ್ಲಿ ಐಕ್ಯರಾದರೆಂದು ನಂಬಲಾಗಿದೆ.

ಬಸವೇಶ್ವರರ ಸುಧಾರಣೆಗಳು :

ಬಸವೇಶ್ವರರು ಜಾತಿರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಪಣತೊಟ್ಟರು.

ಇವರು ಜಾತಿಯತೇ, ಯಜ್ಞಯಾಗಾದಿಗಳನ್ನು ಖಂಡಿಸಿದರು. ದೇಹವೇ ದೇಗುಲ ಎಂದರು.

ಹೆಣ್ಣು ತಾಯಿ ಅವಳೇ ಸರ್ವಸ್ವ ಎಂಬ ಅವರ ಮಾತು ದನಿ ಕಳೆದುಕೊಂಡಿದ್ದ ಸ್ತ್ರೀಯರಿಗೆ ಆತ್ಮವಿಶ್ವಾಸ ತುಂಬಿತು.

ಅವರು ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಇದು ವಚನಕಾರರ ವೇದಿಕೆಯಾಗಿತ್ತು.

ಬಸವೇಶ್ವರರು ಅಸಂಖ್ಯಾತ ವಚನಗಳನ್ನು ರಚಿಸಿದರು. ಇವು ಕೂಡಲಸಂಗಮದೇವ ಎಂಬ ಅಂಕಿತದಿಂದ ಕೊನೆಗೊಳ್ಳುತ್ತದೆ.

ಮಧ್ವಾಚಾರ್ಯರು :

ಮಧ್ವರು ಉಡುಪಿಗೆ ಹತ್ತಿರವಿರುವ ಪಾಜಕ ಗ್ರಾಮದಲ್ಲಿ ಜನಿಸಿದರು. ಮಧ್ಯಗೇಹ ಭಟ್ಟ ಮತ್ತು ವೇದಾವತಿ ಅವರ ತಂದೆ ತಾಯಿ. ಅವರು ದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಸನ್ಯಾಸ ಸ್ವೀಕರಿಸಿದ ಅನಂತರ ಮಧ್ವರು ತಮ್ಮ ಬೋಧನೆಗಳ ಪ್ರಸಾರಕ್ಕಾಗಿ ಭಾರತದ ಎಲ್ಲೆಡೆ ಎರಡು ಬಾರಿ ಸಂಚರಸಿದರು. ವಿಷ್ಣು ಅವರ ಆರಾಧ್ಯ ದೇವರು.

ಮಧ್ವರ ಕೊಡುಗೆಗಳು :

  • ಮಧ್ವರ ಗೀತಾತಾತ್ಪರ್ಯ ನಿರ್ಣಯ, ಮಹಾಭಾರತ ತಾತಪರ್ಯ ನಿರ್ಣಯ ಇನ್ನು ಮುಂತಾದ ೩೭ ಕೃತಿಗಳನ್ನ್ ಸ‍ಂಸೃತದಲ್ಲಿ ರಚಿಸಿದರು.
  • ಉಡುಪಿಯಲ್ಲಿ ಅಷ್ಟಮಠಗಳನ್ನು ಉಪದೇಶ ಮಾಡಿದರು.
  • ಅವರು ಸರಳವಾದ ಭಕ್ತಿಮಾರ್ಗವನ್ನು ಉಪದೇಶ ಮಾಡಿದರು.

FAQ

ಬಸವೇಶ್ವರ ಎಲ್ಲಿ ಜನಿಸಿದರು ?

ಬಸವನ ಬಾಗೇವಾಡಿಯಲ್ಲಿ ಜನಿಸಿದರು.

ಶಂಕರಾಚಾರ್ಯರ ಸಿದ್ದಾಂತ ಯಾವುದು ?

ಅದ್ವೈತ

ಇತರೆ ವಿಷಯಗಳು :

ತೀವ್ರಗಾಮಿ ಯುಗದ ಬಗ್ಗೆ ಮಾಹಿತಿ 

ಅತಿ ಆಸೆ ಗತಿಗೇಡು ಗಾದೆ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *